ಆಧುನಿಕ ಅಹಲ್ಯೆಯರು

ಇದ್ದಾರೆ ಕಲಿಯುಗದಲ್ಲೂ
ಅಹಲ್ಯೆಯರು
ಆಧುನಿಕ ಅಹಲ್ಯೆಯರು
ಇಂದು ಎಂದು ಮುಂದೆಂದೂ
ಕೂಪ ಮಂಡೂಕಗಳಂತೆ
ಗಂಡ ಮನೆ ಮಕ್ಕಳು
ತಾವೇ ಕಟ್ಟಿಕೊಂಡ ಕೋಟೆಗೆ
ಬೀಗ ಹಾಕಿಸಿ ಬೀಗದ ಕೈ
ಗಂಡಂದಿರಿಗೆ ಕೊಟ್ಟು
ಸ್ವಾಭಿಮಾನವ ಮೂಲೆಗಿಟ್ಟು
ವ್ಯಕ್ತಿತ್ವವ ಅಡವಿಟ್ಟು
ಬದುಕುತ್ತಾರೆ ಉಂಡುಟ್ಟು
ಒಂದಿಷ್ಟು ಅನ್ನ ಮೈತುಂಬಾ ಚಿನ್ನ
ಐಷಾರಾಮದ ಜೀವನದೊಟ್ಟಿಗೆ
ಇರಲೇಬೇಕು ಮೂರ್ಖರ ಪೆಟ್ಟಿಗೆ
ಶಾಪಗ್ರಸ್ತ ಅಹಲ್ಯೆಯರಿವರು.
ಯಾವ ಕಾಲದ ರಾಮ ಬಂದರೂ
ಪ್ರತಿಕ್ರಿಯಿಸದ ಹೆಬ್ಬಂಡೆಗಳು
ಊರು ಕೊಳ್ಳೆ ಹೊಡೆದರೂ
ನಿಂತ ನೆಲವೇ ಕುಸಿದರೂ
ಶಿಲರೂಪದ ವನಿತೆಯರು
ಸ್ತ್ರೀ ವಿಮೋಚನೆ ಸ್ತ್ರೀಪರ ಕಾಳಜಿ
ಭಾಷಣಗಳಿಗಷ್ಟೇ ಸೀಮಿತ
ಎಡಗಿವಿಯಲ್ಲಿ ಕೇಳಿ ಬಲಗಿವಿಯಿಂದ ಬಿಟ್ಟು
ನಿರಾತಂಕವಾಗಿ ಮನೆ ಸೇರುವ
ಮುಗ್ಧ ಮುತ್ತೈದೆಯರು
ಹಲ್ಲಿಯಂತೆ ಲೊಚ್ಚಗುಟ್ಟಿ
ಪರಿತಾಪ ಪಶ್ಚಾತ್ತಾಪವಿಲ್ಲ
ಈಗಲ್ಲ ನಾಳೆಗಲ್ಲ ಮೂರು ನೂರು
ತಲೆಮಾರು ಕಳೆದರೂ
ಬದಲಾಗದ ನಾರೀಮಣಿಯರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಕೊಟ್ಟ ಕುದುರೆ
Next post ಮುದ್ದು ಕಂದನ ವಚನಗಳು : ಒಂದು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys